ದಕ್ಷಿಣ ಭಾರತಕ್ಕೆ ಕಾಫಿಯನ್ನು ಪರಿಚಯಿಸಿದ ಮೊದಲ
ಜಿಲ್ಲೆ ಎಂಬ ಖ್ಯಾತಿ ಹೊಂದಿರುವ
ಚಿಕ್ಕಮಗಳೂರು ನಿಸರ್ಗ ರಮಣೀಯ ತಾಣಗಳಿಂದ
ಕೂಡಿದೆ.
ದಕ್ಷಿಣ ಭಾರತಕ್ಕೆ ಕಾಫಿಯನ್ನು ಪರಿಚಯಿಸಿದ ಮೊದಲ
ಜಿಲ್ಲೆ...
more... ಚಿಕ್ಕಮಗಳೂರು. ಈ ಮಲೆನಾಡು ವಾಣಿಜ್ಯ
ಬೆಳೆಗಳ ಜತೆಗೆ ತನ್ನ ನಿಸರ್ಗ ರಮಣೀಯ ತಾಣಗಳಿಂದ,
ಪುರಾತನ ದೇವಳಗಳಿಂದ, ಅತ್ತ ತುಳುನಾಡು,
ಇತ್ತ ಮಲೆನಾಡು, ಮತ್ತೂಂದೆಡೆ
ಬುಡಕಟ್ಟು ಜನಾಂಗ ಮಿಶ್ರಿತ ಜನಪದ
ಸಂಸ್ಕೃತಿಯಿಂದ ಪ್ರಸಿದ್ಧಿ ಪಡೆದಿದೆ. ಜತೆಗೆ 1978ರ
ಲೋಕಸಭೆ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ
ಇಂದಿರಾಗಾಂಧಿ ಆ ಬಳಿಕ ಮತ್ತಿತರ ಪಕ್ಷಗಳ
ಗಣ್ಯರು ಸ್ಪರ್ಧಿಸುವ ಮೂಲಕ
ಚಿಕ್ಕಮಗಳೂರು ಪ್ರಪಂಚದ ಗಮನವನ್ನೂ ಸೆಳೆದಿದೆ.
ಅನೇಕ ರಾಜಮಹಾರಾಜರು ಆಳಿದರೂ, ಪ್ರತಿಷ್ಠಿತ
ಪಕ್ಷಗಳ
ಗಣ್ಯರು ಸ್ಪರ್ಧಿಸಿದರೂ ಚಿಕ್ಕಮಗಳೂರಿನಲ್ಲ ಿ
ಇಂದಿಗೂ ಸುವ್ಯವಸ್ಥಿತ ರಾಷ್ಟ್ರೀಯ
ಹೆದ್ದಾರಿಯಿಲ್ಲ. ಜಿಲ್ಲಾ ಕೇಂದ್ರ
ರೈಲು ಸಂಪರ್ಕದಿಂದ ವಂಚಿತ. ಚಾರ್ಮಾಡಿ ರಸ್ತೆಗೆ
ಶತಮಾನ ಕಳೆದರೂ, ಇನ್ನೂ ಉತ್ತಮ ರಸ್ತೆ ಎಂಬ
ಸ್ಥಾನವಿಲ್ಲ.
ಚಿಕ್ಕಮಗಳೂರು ನಗರಕ್ಕೆ ಹತ್ತಿರದಲ್ಲಿರುವ
ಮಹಾತ್ಮಾಗಾಂಧಿ ಉದ್ಯಾನ ಒಂದು ಸುಂದರ
ತಾಣ. ಇಲ್ಲಿ ಪುಟಾಣಿ ರೈಲು, ಕೊಳ ಮತ್ತಿತರ
ವೈಶಿಷ್ಟéಗಳಿದ್ದು ಬೇಸರ
ಕಳೆಯಲು ಪ್ರಶಸ್ತವಾಗಿದೆ. ಜಿಲ್ಲಾ ಕೇಂದ್ರದ
ಪಕ್ಕದಲ್ಲಿಯೇ ಇದೆ ಕನ್ನಡ ಪೂಜೆಗೆ ಖ್ಯಾತಿವೆತ್ತ
ಹಿರೇಮಗಳೂರು ಕೋದಂಡರಾಮಚಂದ್ರ ದೇವಾಲಯ.
ಜಿಲ್ಲಾಕೇಂದ್ರದಿಂ ದ ಕೇವಲ 10 ಕಿ.ಮೀ. ದೂರ
ಕ್ರಮಿಸಿದರೆ ಸಿಗುವುದೇ ಮುಳ್ಳಯ್ಯನಗಿರಿ.
ಇದು ರಾಜ್ಯದಲ್ಲೇ ಅತ್ಯಂತ ಎತ್ತರದ ಶಿಖರ.
ಮೆಟ್ಟಿಲೇರಿದರೆ ಮುಳ್ಳಯ್ಯನ ಗದ್ದುಗೆ.
ಬೆಟ್ಟದಿಂದ ಕೊಂಚ ದೂರ ಸಾಗಿದರೆ ಮಲ್ಲಿಕಾರ್ಜುನ
ದೇವಾಲಯ. ಬೆಟ್ಟವಿಳಿದು ಅತ್ತಿತ್ತ
ನೋಡುವಷ್ಟರಲ್ಲಿ, ವರ್ಷಪೂರ್ತಿ ಮೈದುಂಬಿ
ಹರಿಯುವ ಹೊನ್ನಮ್ಮನಹಳ್ಳ ಕಾಣಸಿಗುತ್ತದೆ.
ಮುಳ್ಳಯ್ಯನಗಿರಿಗೆ ಹತ್ತಿರದಲ್ಲೇ,
ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ
ಬಾಬಾಬುಡನ್ಗಿರಿ. ಅನನ್ಯ ನಿಸರ್ಗ ಸಂಪತ್ತಿನ,
12 ವರ್ಷಕ್ಕೊಮ್ಮೆ ಅರಳಿ ಕಣ್ಮನ ತಣಿಸುವ
ನೀಲಕುರುಂಜಿ ಹೂವಿನ ಮಡಿಲಿದು.
ಹಿಂದೂ ಮುಸಲ್ಮಾನರ ಭಾವೈಕ್ಯ ಕೇಂದ್ರವಾದ ಈ
ಗಿರಿಯ ಗುಹಾಂತರ ಗವಿಯಲ್ಲಿ ಬಾಬಾ ಖಲಂದರ್
ಮತ್ತವರ ಶಿಷ್ಯರ ಗೋರಿಗಳು, ಅನಸೂಯ ದೇವಿ
ನೆಲೆಸಿದ ಸ್ಥಳ, ದತ್ತಾತ್ರೇಯ ಮತ್ತವರ
ಶಿಷ್ಯರು ತಪಸ್ಸು ಮಾಡಿದ ಸ್ಥಳಗಳಿವೆ.
ಶೋಲಾ ಕಾಡಿನಿಂದ ಮುತ್ತಿನಂತೆ ಇಳಿಯುವ ಜಲಧಾರೆ
ಮಾಣಿಕ್ಯಧಾರ ಇಲ್ಲಿಂದ ಮೂರು ಕಿ.ಮೀ.
ದೂರದಲ್ಲಿದೆ.