Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

হাওড়া - বর্দ্ধমান কর্ড লাইনে যান, 130 কিমি বেগে ট্রেন যাওয়াও কালবৈশাখী ঝড়ের থেকে ভয়ঙ্কর! - Jishnu Thakur

Search Forum
<<prev entry    next entry>>
Blog Entry# 4465589
Posted: Oct 22 2019 (10:19)

No Responses Yet
News Reply
3386 views
2

Oct 22 2019 (10:19)  
SBCKLBGVandeSadharana~
SBCKLBGVandeSadharana~   10625 blog posts
Entry# 4465589               Past Edits
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ:
ಹುಬ್ಬಳ್ಳಿ, ಅಕ್ಟೋಬರ್ 21: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಪೋಟ ಸಂಭವಿಸಿದ್ದು, ಓರ್ವ ವ್ಯಕ್ತಿಯ ಕೈ ಕಟ್ ಆಗಿದೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಹೆಸರಿನಲ್ಲಿ ಬಾಕ್ಸ್ ಒಂದು ಬಂದಿತ್ತು. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಾಕ್ಸ್ ಸ್ಫೋಟಗೊಂಡಿದೆ ಎನ್ನಲಾಗಿತ್ತು, ಆದರೆ ಬಳಿಕ ಅದು ಖಾನಾಪುರ ಅಲ್ಲ ಕೊಲ್ಹಾಪುರ ಶಾಸಕರ ಹೆಸರಲ್ಲಿ ಬಂದಿದ್ದ ಬಾಕ್ಸ್ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ಕೈ ಕತ್ತರಿಸಿಹೋಗಿದೆ. ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಕಾರಣ, ಅದರಲ್ಲೇನಿದೆ ಎಂದು ಬಾಕ್ಸ್ ತೆರೆದಾಗ ಸ್ಫೋಟ ಸಂಭವಿಸಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಿಡಲಾಗುತ್ತಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ, ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಯಾವ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಾಕ್ಸ್‌ನಲ್ಲಿದ್ದ ಸ್ಫೋಟಕ ವಸ್ತು ಯಾವುದು ಎಂದು ಕಂಡುಹಿಡಿಯಲು ಸ್ಯಾಂಪಲ್‌ನ್ನು ಲ್ಯಾಬ್‌ಗೆ
...
more...
ಕಳುಹಿಸಲಾಗಿದೆ. ಶೀಘ್ರವೇ ಮಾಹಿತಿ ಲಭ್ಯವಾಗಲಿದೆ. ಆದರೆ ಅಂಜಲಿ ನಿಂಬಾಳ್ಕರ್ ಅವರ ಹೆಸರಿನಲ್ಲಿ ಈ ಬಾಕ್ಸ್ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೇನುಲಭ್ಯವಾಗಬೇಕಿದೆ. ಹುಸೇನಬಾಬ ಮಕಾನವಾಲೆ. ರೈಲ್ವೆ ನಿಲ್ದಾಣದಲ್ಲಿ ಟಿಫಿನ್ ಮಾರಾಟ ಮಾಡುವ ವ್ಯಕ್ತಿ. ಅಮರಾವತಿ ಎಕ್ಸಪ್ರೇಸ್ ರೈಲಿನಲ್ಲಿದ್ದ ಬಾಕ್ಸನ ಆರ್ ಫಿಎಫ್ ಪೇದೆ ರೈಲಿನಿಂದ ಕೆಳೆಗಳಿಸಿ ಹುಸೇನಸಾಬಗೆ ಓಪನ್ ಮಾಡುವಂತೆ ಸೂಚಿಸಿದಾಗ ಸ್ಟೋಟವಾಗಿದೆ‌. ನೋ ಬಿಜೆಪಿ, ನೋ ಕಾಂಗ್ರೆಸ್ ಒನಲೀ ಶಿವಸೇನಾ ಎಂದು ಸ್ಫೋಟಕವಿದ್ದ ಬಾಕ್ಸ್ ಮೇಲೆ ಬರೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಂದಿ ಹಿಡಿಯುವ ವೇಳೆ ಬಳಸುವ ಸ್ಫೋಟಕ ಇದು ಎಂದು ತಿಳಿದುಬಂದಿದೆ. ಮಹಾರಾಷ್ಟ್ರ ಎಲೆಕ್ಷನ್ ಗೆ ಸಂಬಂಧಿಸಿರಬಹುದು ಎನ್ನಲಾಗುತ್ತಿದೆ.
ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಬಾಕ್ಸ್‌ ಸ್ಫೋಟ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಬಾಕ್ಸ್‌ ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಚಿಕಿತ್ಸೆಗಾಗಿ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂದ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಅನುಮಾನಾಸ್ಪದ ಬಾಕ್ಸ್ ಇದ್ದಕ್ಕಿದಂತೆಯೇ ಬಾಕ್ಸ್ ಬ್ಲಾಸ್ಟ್ ಆಗಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಆರ್ ಪಿಎಫ್ ಹಾಗೂ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಉಳಿದ ಬಾಕ್ಸ್‌ಗಳು ಬಯಲು ಪ್ರದೇಶಕ್ಕೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಪ್ರಕರಣ,ಇನ್ನುಳಿದ ಬಾಕ್ಸ್ ಗಳನ್ನ ಬಯಲು ಪ್ರದೇಶಕ್ಕೆ ಬಾಂಬ್ ನಿಷ್ಕ್ರಿಯ ದಳ ತಂದಿದೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ರುವ ಬಯಲು ಪ್ರದೇಶಗಳಲ್ಲಿ ತಂದಿಟ್ಟ ಬಾಂಬ್ ನಿಷ್ಕ್ರಿಯದಳ. ಮರಳಿನ ಚೀಲಗಳ ರಾಶಿಯಲ್ಲಿ ಹತ್ತಕ್ಕು ಹೆಚ್ಚು ಬಾಕ್ಸ್‌ಗಳನ್ನು ನಿಷ್ಕ್ರಿಯ ದಳ ತಂದಿಟ್ಟಿದೆ.
Source:
Read more at: click here

Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy